ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ 1400 ಕೋಟಿ ರೂಪಾಯಿಗಳ ಬೆಳೆ ವಿಮೆ ಪರಿಹಾರವನ್ನು 13 ಲಕ್ಷ ರೈತರಿಗೆ ಬಿಡುಗಡೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ 202324ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ತಮ್ಮ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಂಡಿರುವ ಅರ್ಹರಿಗೆ ಕೃಷಿ ಸಚಿವರು ಬೆಳೆ ವಿಮೆ ಪರಿಹಾರ ವರ್ಗಾವಣೆ ಕುರಿತು ಮಾಹಿತಿಯನ್ನು ನೀಡಲಾಗಿದ್ದು ಬಗ್ಗೆ ಸಂಪೂರ್ಣವಾದ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.
Contents
ಫಸಲ್ ಭೀಮಾ ಯೋಜನೆ :
ತಮ್ಮ ಬೆಳೆಗಳಿಗೆ 202324ನೇ ಸಾಲಿನಲ್ಲಿ ಫಸಲು ಭೀಮಾ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಬೆಳೆ ವಿಮೆ ಮಾಡಿಸಿಕೊಂಡಿರುವ ಅರ್ಹರ ರೈತರ ಬ್ಯಾಂಕ್ ಖಾತೆಗೆ ಬೆಳೆ ವಿಮೆ ಪರಿಹಾರ ವರ್ಗಾವಣೆ ಕುರಿತು ಕೃಷಿ ಸಚಿವರು ಮಾಹಿತಿಯನ್ನು ತಿಳಿಸಿದ್ದಾರೆ.
ಈ ವರ್ಷ ಸುಮಾರು 25 ಲಕ್ಷ ಜನ ಫಸಲು ಭೀಮಾ ಯೋಜನೆಯ ಅಡಿಯಲ್ಲಿ ತಾವು ಬೆಳೆದಿರುವ ಬೆಳೆ ವಿಮೆಗಾಗಿ ಹೆಸರನ್ನು ನೋಂದಾಯಿಸಿಕೊಂಡಿದ್ದು 2024 ಮಾರ್ಚ್ ತಿಂಗಳ ಅಂತ್ಯದ ಒಳಗಾಗಿ 13 ಲಕ್ಷ ರೈತರಿಗೆ 1400 ಕೋಟಿ ರೂಪಾಯಿಗಳ ಮೊತ್ತವನ್ನು ಬೆಳೆವಿಮೆ ವರ್ಗಾವಣೆ ಮಾಡುವುದಾಗಿ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ರಾಜ್ಯದ ರೈತರಿಗೆ ಮಾಹಿತಿ ನೀಡಿದ್ದಾರೆ.
ಬೆಳೆ ವಿಮೆ ಪರಿಹಾರ :
ಸವಲತ್ತು ವಿತರಣಾ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ನಾಗಮಂಗಲ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿಯವರು ಬೆಳೆ ಪರಿಹಾರ ವಿಮೆಗಾಗಿ ಪ್ರಸ್ತುತ 600 ಕೋಟಿ ರೂಪಾಯಿಗಳ ವಿಮೆ ಹಣ 8 ಲಕ್ಷ ರೈತರಿಗೆ ಪಾವತಿ ಮಾಡಲಾಗಿದೆ.
ಉಳಿದ 800 ಕೋಟಿ ರೂಪಾಯಿಗಳನ್ನು ಸರ್ಕಾರ ಮಾರ್ಚ್ ಅಂತ್ಯದೊಳಗಾಗಿ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನೇನು ಮಾರ್ಚ್ ತಿಂಗಳ ಒಳಗಾಗಿ ರಾಜ್ಯದ ಎಲ್ಲಾ ರೈತರಿಗೆ ಬೆಳೆ ಪರಿಹಾರದ ಹಣ ವರ್ಗಾವಣೆಯಾಗಲಿದೆ ಎಂದು ಹೇಳಬಹುದು.
ಇದನ್ನು ಓದಿ : ಕೇಂದ್ರ ಸರ್ಕಾರ : ಹಣ ಡಬಲ್ ಮಾಡುವ ಯೋಜನೆ ಜಾರಿ 5 ಲಕ್ಷಕ್ಕೆ 10 ಲಕ್ಷ ಗ್ಯಾರಂಟಿ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ !
ಬೆಳೆ ವಿಮೆ ಅರ್ಜಿ ಸ್ಥಿತಿ ಕುರಿತು ಚೆಕ್ ಮಾಡುವ ವಿಧಾನ :
ರಾಜ್ಯದ ರೈತರು ತಮ್ಮ ಮೊಬೈಲ್ ನಲ್ಲಿಯೇ ಬೆಳೆ ವಿಮೆ ಅರ್ಜಿ ಸ್ಥಿತಿ ಕುರಿತು ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದರ ಸಂಪೂರ್ಣ ಮಾಹಿತಿಯನ್ನು ಕುಳಿತಲ್ಲಿಯೇ ತಿಳಿದುಕೊಳ್ಳಬಹುದಾಗಿದೆ. ರೈತರು ತಮ್ಮ ಮೊಬೈಲ್ ನಲ್ಲಿಯೇ ಬೆಳೆ ವಿಮೆ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿ ಕೊಳ್ಳಬೇಕಾದರೆ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಬೇಕು ಈ ಲೇಖನದಲ್ಲಿ ಸುಲಭ ವಿಧಾನದ ಮೂಲಕ ತಮ್ಮ ಬೆಳೆ ವಿಮೆ ಅರ್ಜಿ ಕುರಿತು ಹೇಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂಬುದನ್ನು ನೋಡುವುದಾದರೆ,
- ರಾಜ್ಯ ಸರ್ಕಾರದ ಸಂರಕ್ಷಣಾ ವೆಬ್ಸೈಟ್ ಆದ https://samrakshane.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಬೆಳೆ ವಿಮೆ ಅರ್ಜಿ ಕುರಿತು ಈ ಕೆಳಗಿನ ವಿಧಾನದ ಮೂಲಕ ಸಂಪೂರ್ಣ ಮಾಹಿತಿಯನ್ನು ರೈತರು ತಿಳಿದುಕೊಳ್ಳಬಹುದಾಗಿದೆ.
- ಮೊದಲು ಬೆಳೆವಿಮೆ ಸ್ಟೇಟಸ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. https://samrakshane.karnataka.gov.in
- ಕ್ಲಿಕ್ ಮಾಡಿದ ನಂತರ ಅದರಲ್ಲಿ ವರ್ಷದ ಆಯ್ಕೆ ಅಥವಾ ಸೆಲೆಕ್ಟ್ ಇನ್ಸೂರೆನ್ಸ್ ಇಯರ್ ಕಾಲಂನಲ್ಲಿ 2023-24 ಎಂಬ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು.
- ಅದಾದ ನಂತರ ಋತು ಆಯ್ಕೆಯನ್ನು ಆಯ್ಕೆಮಾಡಿಕೊಂಡು ಅದರಲ್ಲಿ ಖಾರಿಫ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
- ಖಾರಿಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು
- ಅದಾದ ನಂತರ ಪೇಜ್ ನ ಕೆಳಗೆ ಕಾಣುವ ಚೆಕ್ ಸ್ಟೇಟಸ್ ಎಂಬುದರ ಬಟನ್ ಮೇಲೆ ಕ್ಲಿಕ್ ಮಾಡಿ ಚೆಕ್ ಸ್ಟೇಟಸ್ ಬೈ ಟೈಪ್ ಆಯ್ಕೆ ಎಂಬ ವಿಭಾಗದಲ್ಲಿ ತಮ್ಮ ಮೊಬೈಲ್ ನಂಬರ್ ಗಳನ್ನು ಹಾಕಬೇಕಾಗುತ್ತದೆ.
- ಮೊಬೈಲ್ ನಂಬರ್ ಅನ್ನು ನಮೂದಿಸಿದ ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಆಧಾರ್ ಸಂಖ್ಯೆಯನ್ನು ಕೂಡ ನಮೂದಿಸಬೇಕು.
- ಅದಾದ ನಂತರ ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಿ ಸರ್ಚ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆ ವಿಮೆ ಅರ್ಜಿಯ ವಿವರ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಹೀಗೆ ಮೊಬೈಲ್ ಮೂಲಕವೇ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಬೆಳೆವಿಮೆ ಸ್ಥಿತಿಯ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಬೆಳೆವಿಮೆ ಆದ್ಯ ಸ್ಥಿತಿಯನ್ನು ಚೆಕ್ ಮಾಡಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ಮಾರ್ಚ್ ತಿಂಗಳಿನಲ್ಲಿ ಬೆಳೆ ವಿಮೆ ಪರಿಹಾರದ ಹಣ ಅಂದರೆ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಬೆಳೆ ವಿಮೆಯ ಹಣ ವರ್ಗಾವಣೆ ಮಾಡುವುದಾಗಿ ಮಾಹಿತಿ ನೀಡಿದ್ದು.
ಈ ಬಗ್ಗೆ ಪ್ರತಿಯೊಬ್ಬ ರೈತನಿಗೂ ಶೇರ್ ಮಾಡುವ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ 1,400 ಕೋಟಿ ಬೆಲೆ ವಿಮೆ ಹಣವನ್ನು 13 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಮಾಹಿತಿಯನ್ನು ಕೃಷಿ ಸಚಿವರಾದ ಚೆಲುವರಾಯ ಸ್ವಾಮಿಯವರು ಮಾಹಿತಿ ಹಂಚಿಕೊಂಡಿರುವುದರ ಬಗ್ಗೆ ಎಲ್ಲರಿಗೂ ಶೇರ್ ಮಾಡಿ .
ಇದರಿಂದ ಅವರೇನಾದರೂ ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದರ ಅರ್ಜಿಯ ಸ್ಥಿತಿಯನ್ನು ಹಾಗೂ ಎಲ್ಲಾ ಮಾಹಿತಿಯನ್ನು ಸುಲಭವಾಗಿ ಹೇಗೆ ನೋಡಬಹುದು ಎಂಬುದರ ಬಗ್ಗೆಯೂ ಕೂಡ ಈ ಲೇಖನದ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಎಲ್ಲ ವಿದ್ಯಾರ್ಥಿಗಳಿಗೆ 30,000 ಹಣ ಸ್ಕಾಲರ್ಶಿಪ್ ಸಿಗುತ್ತೆ ! ಅರ್ಜಿ ಸಲ್ಲಿಸಲು ಸಿದ್ದರಾಗಿ ಇಲ್ಲಿದೆ ಲಿಂಕ್
- BJP ಪಕ್ಷದ 2ನೇ ಪಟ್ಟಿ ರಿಲೀಸ್ 15 ಅಭ್ಯರ್ಥಿಗಳ ಹೆಸರು ಘೋಷಣೆ : ಪ್ರಮುಖರಿಗೆ ಟಿಕೆಟ್ ಇಲ್ಲ.!
ಬೆಲೆ ವಿಮೆ ಯೋಜನೆಗೆ ಎಷ್ಟು ಹಣ ಬೇಕು ..?
1600 ಕೋಟಿ ರೂಪಾಯಿ ಕೊಟ್ಟಿಗಿಂತ ಹೆಚ್ಚು .
ಒಬ್ಬ ರೈತನಿಗೆ ಎಷ್ಟು ಹಣ ಜಮಾ ..?
ಬೆಳೆಗಳಿಗೆ ಅನುಗುಣವಾಗಿ ಬರುತ್ತೆ .