ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಲ್ಲಿನ ಗ್ರಾಹಕರಿಗೆ ಒಂದು ಅಧಿಕೃತ ಘೋಷಣೆಯನ್ನು ಹೊರಡಿಸಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ b ಸಾಮಾನ್ಯವಾಗಿ ಹೊಸ ಹೊಸ ಯೋಜನೆಗಳನ್ನು ಗ್ರಾಹಕರ ಒಳಿತಿಗಾಗಿ ಜಾರಿಗೆ ತರುವುದು ಸರ್ವೇ ಸಾಮಾನ್ಯವಾಗಿದ್ದು ಈ ವಿಚಾರದಲ್ಲಿ ಇದೀಗ ಬ್ಯಾಂಕ್ ಆಡಳಿತ ವೈಕರಿಗು ಕೂಡ ಸೇರಿದೆ.
ತಮ್ಮ ಗ್ರಾಹಕರ ಹಿತಾಸಕ್ತಿಯೇ ಎಲ್ಲ ಬ್ಯಾಂಕುಗಳಿಗೂ ಮೊದಲ ಆದ್ಯತೆ ಯಾಗಿದ್ದು ಜನರ ಆರ್ಥಿಕ ವ್ಯವಹಾರ ಉತ್ತಮವಾಗಿರುವಂತೆ ನೋಡಿಕೊಳ್ಳುವ ನೆಲೆಯಲ್ಲಿ ಆಗಾಗ ಹೊಸ ಹೊಸ ಯೋಜನೆಗಳನ್ನು ಬ್ಯಾಂಕುಗಳು ಪರಿಚಯಿಸುತ್ತಲೇ ಇರುತ್ತದೆ.
ಈ ಹಿನ್ನೆಲೆಯಲ್ಲಿ ಇದೀಗ ಭಾರತದಲ್ಲಿರುವ ಪ್ರತಿಷ್ಠಿತ ಬ್ಯಾಂಕ್ ಆದ ಎಸ್ಬಿಐ ಕೂಡ ಒಂದು ನೂತನ ಯೋಜನೆಯನ್ನು ಘೋಷಣೆ ಮಾಡಿದ್ದು ಈ ಯೋಜನೆಯ ಮೂಲಕ ಎಸ್ಬಿಐ ನಲ್ಲಿ ಬ್ಯಾಂಕ್ ಖಾತೆ ಹೊಂದಿರುವವರಿಗೆ ದೊಡ್ಡ ಗುಡ್ ನ್ಯೂಸ್ ಎಂದು ಹೇಳಬಹುದು.
SBI ಯಿಂದ ಹೊಸ ಯೋಜನೆ :
ಭಾರತದಲ್ಲಿರುವ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯೋಜನೆ ಒಂದನೇ ತನ್ನ ಗ್ರಾಹಕರಿಗೆ ಘೋಷಣೆ ಮಾಡಿದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಈ ಸುದ್ದಿ ಎಸ್ ಬಿ ಐ ಬ್ಯಾಂಕಿನ ಗ್ರಾಹಕರಿಗೆ ಉಪಯೋಗವಾಗಲಿದೆ. ಬಹುತೇಕ ಬ್ಯಾಂಕುಗಳಲ್ಲಿ ಮಾರ್ಚ್ ತಿಂಗಳು ಬಂತೆಂದರೆ ಹಣಕಾಸಿನ ಅಂತಿಮ ಅವಧಿ ಎಂದು ಹೇಳಲಾಗುತ್ತದೆ.
ಅಲ್ಲದೆ ಬ್ಯಾಂಕಿನ ವಹಿವಾಟುಗಳು ಲೆಕ್ಕಾಚಾರಗಳು ಕೂಡ ಇದೇ ಅವಧಿಯಲ್ಲಿ ನಡೆಯಲಿದ್ದು , ಬಹುತೇಕ ಹೊಸ ಕ್ರಮಗಳನ್ನು ಏಪ್ರಿಲ್ ನಂತರ ಅಳವಡಿಸಿಕೊಂಡು ತಮ್ಮ ಬ್ಯಾಂಕಿನ ಆಡಳಿತ ಕಾರ್ಯವೈಖರಿ ಸಿದ್ಧಪಡಿಸಲಾಗುತ್ತದೆ.
ಅದರಂತೆ ತನ್ನ ಗ್ರಾಹಕರಿಗೆ ಎಸ್ಬಿಐ ಕೂಡ ಅಮೃತ ಕಲಶ ಮತ್ತು ಹಿರಿಯ ನಾಗರಿಕರಿಗೆ ಎಫ್ ಐ ಡಿ ಮತ್ತು ಕಡಿಮೆ ಬಡ್ಡಿ ದರದ ಗೃಹ ಸಾಲ ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ ಅವುಗಳ ಅರ್ಜಿಗೆ ಅಂತಿಮ ದಿನ ವಿಸ್ತರಣೆಯಾಗಿದೆ.
ಇದನ್ನು ಓದಿ : ಬೆಳ್ಳಂಬೆಳಗ್ಗೆ ಸತತ ಏರಿಕೆಯಾಗಿದ್ದ ಚಿನ್ನದ ಬೆಲೆ ಕುಸಿತ : ಖರೀದಿಸಲು ಮುಗಿಬಿದಿದ್ದರೆ ಗ್ರಾಹಕರು ..!
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ :
SBI ನಲ್ಲಿ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಇದೀಗ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
- ಮಾರ್ಚ್ 31ರವರೆಗೆ ಅಮೃತ ಕಲಶ ಯೋಜನೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಶೇಕಡ 7.10% ರಷ್ಟು ಅಮೃತ್ ಕಲಶ ಯೋಜನೆ ಎಂದರೆ ಹಣಕಾಸಿನ ಹೂಡಿಕೆಯಾಗಿದ್ದು ಬಡ್ಡಿ ದರವನ್ನು ಇದರಲ್ಲಿ ಪಡೆಯಬಹುದಾಗಿದೆ. ಹಣವನ್ನು ಹೂಡಿಕೆ ಮಾಡಿದ ನಂತರ ಅವಧಿಗಿಂತ ಮೊದಲೇ ಹಣವನ್ನು ವಾಪಸ್ಸು ಪಡೆಯಲು ಬಯಸಿದರೆ ನಿಮ್ಮ ಮೊತ್ತದಿಂದ 0.50 ಪರ್ಸೆಂಟ್ ಅಷ್ಟು ದಂಡವನ್ನು ಈ ಯೋಜನೆಗೆ ಸಂಬಂಧಿಸಿ ದಂತೆ ಪಾವತಿ ಮಾಡಬೇಕು. ಈ ಒಂದು ಅಮೃತ ಕಲಶ ಯೋಜನೆಯು ದೀರ್ಘಾವಧಿಯ ಉಳಿತಾಯ ಯೋಜನೆಯಲ್ಲಿ ಬಹಳ ಉಪಯುಕ್ತ ಆಗಲಿದೆ.
- ಅತಿ ಕಡಿಮೆ ಬಡ್ಡಿ ದರಕ್ಕೆ ಮನೆ ನಿರ್ಮಾಣಕ್ಕೆ ಉತ್ತೇಜನ ನೀಡಲು ಗೃಹ ಸಾಲವನ್ನು ಎಸ್ಬಿಐ ನೀಡುತ್ತಿದ್ದು ಇದರ ಅವಧಿಯು ಕೂಡ ಮಾರ್ಚ್ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಿಬಿಲ್ ಸ್ಕೋರ್ ಏನಾದರೂ 750 ರಿಂದ 800 ಇದ್ದರೆ ಅಂತಹ ವ್ಯಕ್ತಿಗಳಿಗೆ ಶೇಕಡ 8.60 ಪರ್ಸೆಂಟ್ ರಂತೆ ಸಾಲ ಸೌಲಭ್ಯವನ್ನು ಎಸ್ಬಿಐ ನಲ್ಲಿ ನೀಡಲಾಗುತ್ತದೆ. ಒಂದು ವೇಳೆ ಒಂಬತ್ತು ಪರ್ಸೆಂಟ್ ಕಡಿಮೆ ಇದ್ದರೆ ಬಡ್ಡಿದರವನ್ನು ವಿಧಿಸಲಾಗುತ್ತದೆ.
- ಹಿರಿಯ ನಾಗರೀಕರ ಉಳಿತಾಯ ಯೋಜನೆಗೆ ಎಸ್ ಬಿ ಐ ಬ್ಯಾಂಕ್ ನ ಮೂಲಕ ಬೆಂಬಲ ನೀಡಲಾಗುತ್ತಿದ್ದು ಕನಿಷ್ಠ ಐದು ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಸೀನಿಯರ್ ಸಿಟಿಜನ್ ಎಫ್ಡಿ ಕೇರ್ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರು 7.50% ರಷ್ಟು ಬಡ್ಡಿ ದರವನ್ನು ಪಡೆಯುತ್ತಾರೆ. ಮಾರ್ಚ್ 31 2024ರ ಒಳಗಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಹೀಗೆ ಈ ಮೂರು ಯೋಜನೆಗಳಿಗೆ ಎಸ್ಬಿಐ ನಲ್ಲಿ ಅವಕಾಶ ಕಲ್ಪಿಸಲಾಗಿದ್ದು ಈ ಯೋಜನೆಗಳಿಗೆ ದಿನಾಂಕ ವಿಸ್ತರಣೆ ಮಾರ್ಚ್ 31ರವರೆಗೆ ನೀಡಲಾಗಿದೆ.
ಹೀಗೆ ಎಸ್ಬಿಐ ನಲ್ಲಿ ಖಾತೆ ಹೊಂದಿರುವವರು ಈ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಮಾರ್ಚ್ 31ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ಎಸ್ಬಿಐನಿಂದ ಯೋಜನೆಗಳ ಪ್ರಯೋಜನವನ್ನು ಸುಲಭವಾಗಿ ಪಡೆಯಬಹುದಾಗಿದೆ.
ಹಾಗಾಗಿ SBI ನಲ್ಲಿ ಖಾತೆಯನ್ನು ಹೊಂದಿರುವ ಎಲ್ಲ ಗ್ರಾಹಕರಿಗೆ ಮಾಹಿತಿಯನ್ನು ಶೇರ್ ಮಾಡುವ ಮೂಲಕ SBI ನಲ್ಲಿ ಇರುವಂತಹ ಕೆಲವು ಯೋಜನೆಗಳಿಗೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿ ಧನ್ಯವಾದಗಳು.