ರಾಜ್ಯ ಸರ್ಕಾರ ರೈತರಿಗೆ ಬೇರೆ ಬೇರೆ ಅವಧಿಯ ಕೃಷಿ ಸಾಲವನ್ನು (Agriculture Loan) ಬಡ್ಡಿ ರಹಿತವಾಗಿ ಅಥವಾ ಅತಿ ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತಿದೆ. ಮೊದಲಿಗಿಂತ ಹೆಚ್ಚಿನ ಮೊತ್ತದ ಸಾಲ ಸೌಲಭ್ಯ (Loan) ನೀಡಲಾಗುತ್ತಿದ್ದು 10-15ಲಕ್ಷ ರೂಪಾಯಿಗಳವರೆಗಿನ ಕೃಷಿ ಸಾಲ ಪಡೆಯಬಹುದು.
![5 lakh interest free loan to farmers](https://i0.wp.com/kannadadigital.com/wp-content/uploads/2024/04/5-lakh-interest-free-loan-to-farmers.jpg?resize=300%2C169&ssl=1)
ರೈತರ ಕೃಷಿ ಚಟುವಟಿಕೆ (Agriculture activities) ಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸುಲಭ ಸಾಲ ಯೋಜನೆಯನ್ನು (Loan scheme) ಸರ್ಕಾರ ಪರಿಚಯಿಸಿದ.
ದೀರ್ಘಾವಧಿಯ ಸಾಲ ಪಡೆಯಬಹುದು!
ಇನ್ನು 5 ಲಕ್ಷಗಳ ವರೆಗೆ ಬಡ್ಡಿ ರಹಿತ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ. 2024 ವರ್ಷದ ಹಣಕಾಸಿನ ಆರಂಭದಿಂದ ಈ ಸೌಲಭ್ಯ ರೈತರಿಗೆ ಲಭ್ಯವಾಗಲಿದೆ.
ಇದನ್ನು ಓದಿ : ಸಾರ್ವಜನಿಕರಿಗೆ ಸಿಹಿಸುದ್ದಿ: ಇನ್ಮುಂದೆ ಪಡಿತರ ಚೀಟಿ ಮೂಲಕ 46 ವಸ್ತುಗಳು ಲಭ್ಯ!!
ಯಂತ್ರ ಖರೀದಿಗೆ ಸಾಲ!
ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಕೆಲವು ಪ್ರಮುಖ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ. ಉದಾಹರಣೆಗೆ ಟ್ರಾಕ್ಟರ್ ಗಳು, ಹೂಳೆತ್ತುವ ಯಂತ್ರ ಮೊದಲಾದ ಯಂತ್ರ ಖರೀದಿ ಮಾಡಬೇಕಾಗುತ್ತದೆ.
ಸರ್ಕಾರ ಇದೀಗ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಫಸಲು ಮಾರಾಟ ಮಾಡಲು ಬಳಸುವ ವಾಹನ ಖರೀದಿಗೆ 7 ಲಕ್ಷಗಳವರೆಗೆ ಸಾಲ ನೀಡುತ್ತದೆ. ಮತ್ತು ಇದಕ್ಕೆ ಕೇವಲ 4% ಬಡ್ಡಿ ದರ ವಿಧಿಸಲಾಗುತ್ತದೆ.
ರಾಜ್ಯದಲ್ಲಿ ಸರ್ಕಾರ 50ಕೋಲ್ಡ್ ಸ್ಟೋರೇಜ್ (Cold storage) ಸ್ಥಾಪಿಸಲು ಮುಂದಾಗಿದ್ದು ಇದರಿಂದ ರೈತರು ಪ್ರಯೋಜನ ಪಡೆದುಕೊಳ್ಳಬಹುದು, ಇದರ ಜೊತೆಗೆ ರೇಷ್ಮೆ ಬೆಳೆಗಾರರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು.
ರಾಜ್ಯ ಸರ್ಕಾರ ವಿಶೇಷವಾಗಿ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿದ್ದು ,ಯೋಜನೆಯ ಅಡಿಯಲ್ಲಿ ಜಾನುವಾರುಗಳು ಆಕಸ್ಮಿಕ ಮರಣ ಹೊಂದಿದರೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು. ಇದಕ್ಕೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಪಶು ಸಂಗೋಪನ ವೈದ್ಯಕೀಯ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು.