ನಮಸ್ಕಾರ ಸ್ನೇಹಿತರೆ 1 ಲಕ್ಷ ಪ್ರೋತ್ಸಾಹ ಧನ ದೇಶದ ಮಹಿಳೆಯರಿಗೆ ನೀಡುವ ಗ್ಯಾರಂಟಿ ಯೋಜನೆ ಒಂದನ್ನು ಘೋಷಣೆ ಮಾಡಲಾಗಿದೆ. ದೇಶದಾದ್ಯಂತ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಇದೀಗ ದೇಶದ ಅತ್ಯಂತ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ನೀಡುವ ಗುರಿಯನ್ನು ಹೊಂದಿರುವ ಯೋಜನೆ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ನೀಡುತ್ತಾರೆ.
![Congress party announces 5 guarantees for Lok Sabha elections](https://i0.wp.com/kannadadigital.com/wp-content/uploads/2024/03/Congress-party-announces-5-guarantees-for-Lok-Sabha-elections-300x169.jpg?resize=300%2C169&ssl=1)
ಹಾಗಾದರೆ ಮಹಿಳೆಯರಿಗೆ ಯಾವ ಯೋಜನೆಯ ಮೂಲಕ ಒಂದು ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ ಎಂಬುದರ ಸರ್ಕಾರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
Contents
ಮಹಿಳೆಯರಿಗೆ ಒಂದು ಲಕ್ಷ ಗ್ಯಾರಂಟಿ ಯೋಜನೆ :
ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಘೋಷಣೆ ಮಾಡಿ ಇದೀಗಾಗರ ಪ್ರಭಾವದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವು ಅಧಿಕಾರದ ಗದ್ದುಗೆ ಹಿಡಿದಿದ್ದು ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಚುನಾವಣಾ ಮಾದರಿಯನ್ನು ಅನುಸರಿಸುತ್ತಿದೆ.
ತೆಲಂಗಾಣ ಸೇರಿ ವಿವಿಧ ವಿಧಾನಸಭಾ ಚುನಾವಣೆಗಳಲ್ಲಿ ಈಗಾಗಲೇ ಗ್ಯಾರಂಟಿ ಘೋಷಣೆಯಿಂದ ಯಶಸ್ವಿಯಾಗಿರುವ ಪಕ್ಷ ಇದೀಗ ಲೋಕಸಭಾ ಚುನಾವಣೆಗೂ ಕೂಡ ಮತ್ತೆ ಗ್ಯಾರಂಟಿ ಘೋಷಣೆಗಳನ್ನು ತಿಳಿಸುತ್ತಿದೆ.
ಇದನ್ನು ಓದಿ : ಹೋಳಿ ಭರ್ಜರಿ ಗಿಫ್ಟ್.! ಇಳಿಕೆ ಕಂಡ ಪೆಟ್ರೋಲ್-ಡೀಸೆಲ್
ಸರ್ಕಾರದ ಕೈಹಿಡಿದ ಗ್ಯಾರಂಟಿ ಯೋಜನೆಗಳು :
ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಗು ಮುನ್ನ ಘೋಷಣೆ ಮಾಡಿದ್ದ ಉಚಿತ ವಿದ್ಯುತ್ ನೋಡುವ ಗೃಹಜೋತಿ ಯೋಜನೆ ಉಚಿತ ಬಸ್ ಪ್ರಯಾಣ ನಡೆಸುವ ಶಕ್ತಿ ಯೋಜನೆ ಹಾಗೂ ಉಚಿತ ಅಕ್ಕಿ ವಿತರಣೆ ಮಾಡುವ ಅನ್ನ ಭಾಗ್ಯ ಯೋಜನೆ ಜೊತೆಗೆ ನಿರುದ್ಯೋಗಿಗಳಿಗೆ ಪ್ರೋತ್ಸಾಹ ಧನವಿತರಿಸುವಂತಹ ಯುವನಿಧಿ ಯೋಜನೆಗೆ ಹಾಗೂ ಮಹಿಳೆಯರಿಗೆ ಪ್ರತಿ ತಿಂಗಳು ನೀಡುವ 2000ಗಳ ಪ್ರೋತ್ಸಾಹ ಧನ ಗೃಹಲಕ್ಷ್ಮಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿತ್ತು.
ಈ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಚುನಾವಣೆಗು ಮುಂಚೆ ಘೋಷಣೆ ಮಾಡಲಾಗಿದ್ದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈಡೇರಿಸುವ ಮೂಲಕ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ ಎಂದು ಹೇಳಬಹುದು. ಕರ್ನಾಟಕದ ನಂತರ ತೆಲಂಗಾಣ ವಿಧಾನಸಭೆಯ ಚುನಾವಣೆಯಲ್ಲಿ ಕೂಡ ಗ್ಯಾರಂಟಿ ಘೋಷಣೆಗಳು ಫಲ ನೀಡಿದ್ದು ಇದೀಗ ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆಗೂ ಮುನ್ನ ಘೋಷಣೆ ಮಾಡಲಾಗಿದೆ.
ತೆಲಂಗಾಣ ಲೋಕಸಭಾ ಚುನಾವಣೆಯ ಗ್ಯಾರಂಟಿ ಯೋಜನೆಗಳು :
ಲೋಕಸಭಾ ಚುನಾವಣೆಗೂ ಮುನ್ನವೇ ತೆಲಂಗಾಣ ರಾಜ್ಯ ಸರ್ಕಾರವು ಇದೀಗ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಆ ಗ್ಯಾರಂಟಿ ಯೋಜನೆಗಳು ಯಾವುವು ಎಂದು ನೋಡುವುದಾದರೆ.
- ನಾರಿ ನ್ಯಾಯ ಗ್ಯಾರಂಟಿ ಘೋಷಣೆ : ನಾರಿ ನ್ಯಾಯ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಘೋಷಣೆ ಮಾಡಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ.
- ಮಹಾಲಕ್ಷ್ಮಿ ಯೋಜನೆ : ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದು ಕರ್ನಾಟಕದಲ್ಲಿ ಜಾರಿಯಾದ ಗೃಹಲಕ್ಷ್ಮಿ ಯೋಜನೆಯಂತೆ ಇದೀಗ ಮಹಾಲಕ್ಷ್ಮಿ ಯೋಜನೆ ಕೂಡ ದೇಶದಲ್ಲಿ ಜಾರಿಗೊಳಿಸಲಾಗುತ್ತಿದೆ.
- ಶೇಕಡ 50ರಷ್ಟು ಉದ್ಯೋಗದಲ್ಲಿ ಹಕ್ಕು : ಗ್ಯಾರೆಂಟಿ ಯೋಜನೆಯ ಅಡಿಯಲ್ಲಿ ಅರ್ಧದಷ್ಟು ಜನಸಂಖ್ಯೆ ಪೂರ್ಣ ಹಕ್ಕು ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಹೊಸ ನೇಮಕಾತಿಗಳಲ್ಲಿ ಕೇಂದ್ರ ಸರ್ಕಾರದಲ್ಲಿ ಮಹಿಳೆಯರಿಗೆ ಶೇಕಡ 50 ರಷ್ಟು ಹಕ್ಕನ್ನು ನೀಡಲಾಗುತ್ತದೆ.
- ಶಕ್ತಿಕ ಸಮ್ಮಾನ : ಈ ಯೋಜನೆಯ ಅಡಿಯಲ್ಲಿ ಅಂಗನವಾಡಿ ಆಶಾ ಹಾಗೂ ಮಧ್ಯಾಹ್ನದ ಬಿಸಿ ಊಟ ಕಾರ್ಯಕರ್ತರಿಗೆ ವಿಶೇಷ ಕೊಡುಗೆಯನ್ನು ನೀಡುವಂತಹ ಭರವಸೆಯನ್ನು ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಕಾಂಗ್ರೆಸ್ ಪಕ್ಷವು ನೀಡಿದೆ.
- ಅಧಿಕಾರ ಮೈತ್ರಿ : ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುವಂತಹ ಯೋಜನೆ ಅಧಿಕಾರ ಮೈತ್ರಿ ಆಗಿದ್ದು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ ಸಹಾಯ ಮಾಡಲು ಅಧಿಕಾರ ಮೈತ್ರಿ ರೂಪದಲ್ಲಿ ಕಾನೂನು ಸಹಾಯಕರನ್ನು ನೇಮಿಸಲಾಗುತ್ತದೆ.
- ಸಾವಿತ್ರಿಬಾಯಿ ಪುಲೆ ಹಾಸ್ಟೆಲ್ : ತಾತ್ಕಾಲಿಕವಾಗಿ ಉದ್ಯೋಗ ಶಿಕ್ಷಣ ಇತ್ಯಾದಿ ಕಾರಣಗಳಿಂದಾಗಿ ನಗರದಲ್ಲಿ ವಾಸ ಮಾಡುವಂತಹ ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹಾಸ್ಟೆಲ್ ಹೆಸರಿನಲ್ಲಿ ಉಚಿತ ಮಹಿಳಾ ವಸತಿ ನಿಲಯವನ್ನು ಪ್ರತಿಶೀಲ ಕೇಂದ್ರಗಳಲ್ಲಿ ನಿರ್ಮಿಸುದಾಗಿ ಕಾಂಗ್ರೆಸ್ ಪಕ್ಷವು ಭರವಸೆ ನೀಡಿದೆ.
ಹೀಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವುದರ ಮೂಲಕ ಅಧಿಕಾರವನ್ನು ಪಡೆಯುವಂತಹ ಭರವಸೆ ಹೊಂದಿದೆ.
ಒಟ್ಟಾರೆ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರಿಗೆ ಹೆಚ್ಚಿನದಾಗಿ ಸೌಲಭ್ಯವನ್ನು ನೀಡುವ ಉದ್ದೇಶದಿಂದ 5 ಗ್ಯಾರಂಟಿ ಘೋಷಣೆಗಳನ್ನು ಆರ್ಥಿಕ ನೆರವಿನಿಂದ ಹಿಡಿದು ಉದ್ಯೋಗದ ಭರವಸೆ ಅವರಿಗೆ ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿದೆ .
ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಏನು ಭರವಸೆ ನೀಡಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.