ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ 2024ರಲ್ಲಿ ಪ್ರಾರಂಭಿಸಿರುವ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತಾಗಿ. ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು 2019 ರಿಂದ ಈವರೆಗೆ ಅಲ್ಪಾವಧಿಯಲ್ಲಿ ಪ್ರಾರಂಭಿಸಿ ಮತ್ತೆ ಸರ್ಕಾರವು ಸ್ಥಗಿತಗೊಳಿಸಿತ್ತು ಇದಕ್ಕೆ ಮುಖ್ಯ ಕಾರಣ ಸಾವಿರಾರು ಅನಧಿಕೃತ ಪಡಿತರ ಚೀಟಿಯ ತೆರವುಗೊಳಿಸುವ ಸಲುವಾಗಿ ರಾಜ್ಯದಲ್ಲಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.
![Last date to apply for new ration card](https://i0.wp.com/kannadadigital.com/wp-content/uploads/2024/04/Last-date-to-apply-for-new-ration-card.jpg?resize=300%2C169&ssl=1)
ರಾಜ್ಯದಲ್ಲಿ ಹೊಸ ಸರ್ಕಾರ 2023ರ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ನಂತರ ನಾನು ಯೋಜನೆಗಳನ್ನು ಅನುಷ್ಠಾನ ಮಾಡಿತು ಈ ಎಲ್ಲ ಯೋಜನೆಗಳಿಗೆ ಅಗತ್ಯವಾಗಿ ಹಾಗೂ ಕಡ್ಡಾಯವಾಗಿ ಮೂಲ ದಾಖಲೆಗಳಲ್ಲಿ ಒಂದಾದಂತಹ ಪಡಿತರ ಚೀಟಿ ಅಗತ್ಯವಾಯಿತು.
ಸರ್ಕಾರದ ಯೋಜನೆಯ ಪ್ರಮುಖ ದಾಖಲೆ ಪಡಿತರ ಚೀಟಿ :
2023ರ ಚುನಾವಣೆಯ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು ಈ ಎಲ್ಲ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಪಡಿತರ ಚೀಟಿ ಪ್ರಮುಖವಾದ ದಾಖಲೆಯಾಗಿದೆ.
ಆದರೆ ಇತ್ತೀಚಿಗೆ ಮದುವೆಯಾದಂತಹ ಹಾಗೂ ಕುಟುಂಬ ವಿಭಜನೆಯಾದ ಸದಸ್ಯರಿಗೆ ಇದುವರೆಗೂ ಕೂಡ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಕೆಲವು ಬಾರಿ ರಾಜ್ಯ ಸರ್ಕಾರ ಅಲ್ಪಾವಧಿಯಲ್ಲಿ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿದರು ಕೂಡ ರಾಜ್ಯದಲ್ಲಿ ಅಷ್ಟೇನು ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳು ಯಶಸ್ವಿಯಾಗಿಲ್ಲ.
ಆದ್ದರಿಂದ ಹೊಸದಾಗಿ ಈ ಬಾರಿ ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತೇವೆ ಎಂದು ಸರ್ಕಾರದ ಕೆಲವೊಂದು ಮೂಲಗಳ ಪ್ರಕಾರ ತಿಳಿದಿದೆ. ಅದರಂತೆ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡಬಹುದು.
ಇದನ್ನು ಓದಿ : ಹೆಣ್ಣು ಮಕ್ಕಳಿಗೆ ಭರ್ಜರಿ ಸುದ್ದಿ.!! ಈ ಯೋಜನೆಯಡಿ ನಿಮ್ಮದಾಗಲಿದೆ 50,000 ರೂ. ಇಂದೇ ಅಪ್ಲೈ ಮಾಡಿ
ಹೊಸ ಪಡಿತರ ಚೀಟಿ ಅಗತ್ಯ ದಾಖಲೆಗಳು :
ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
- ಸದಸ್ಯ ಅಥವಾ ಸದಸ್ಯರು ಕಡ್ಡಾಯವಾಗಿ ಆದಾಯ ಪ್ರಮಾಣ ಪತ್ರವನ್ನು ಪಡಿತರ ಚೀಟಿ ಅರ್ಜಿ ಸಲ್ಲಿಸಲು ಹೊಂದಿರಬೇಕು ಅವರ ಆದಾಯ ವಾರ್ಷಿಕವಾಗಿ ಎರಡೂವರೆ ಲಕ್ಷಕ್ಕಿಂತ ಕಡಿಮೆ ಇರಬೇಕು.
- ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರದ ಅವಶ್ಯಕತೆ ಇದ್ದು ಕ್ಯಾಸ್ಟ್ ಸರ್ಟಿಫಿಕೇಟ್ ಅನ್ನು ಸಂಬಂಧಪಟ್ಟ ತಾಲೂಕು ಕಚೇರಿಯಿಂದ ಅಭ್ಯರ್ಥಿಗಳು ಪಡೆದುಕೊಂಡಿರಬೇಕು.
- ಅಲ್ಲದ ಅಭ್ಯರ್ಥಿಗಳು ಚಾಲ್ತಿಯಲ್ಲಿರುವಂತಹ ಮೊಬೈಲ್ ನಂಬರ್ ಅನ್ನು ಕೂಡ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಬೇಕು.
- ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಓಟಿಪಿ ನಂಬರ್ ನ ಅವಶ್ಯಕತೆ ಇರುವುದರಿಂದ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ಮೊಬೈಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.
- ಎಲ್ಲ ದಾಖಲೆಗಳನ್ನು ಹೊಂದಿದ ನಂತರ ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೈ ಬೆರಳುಗಳ ಮುದ್ರೆಯನ್ನು ಅಭ್ಯರ್ಥಿಗಳದ್ದು ತೆಗೆದುಕೊಳ್ಳಲಾಗುತ್ತದೆ ಹೀಗೆ ತೆಗೆದುಕೊಳ್ಳುವುದರಿಂದ ಪಡಿತರವನ್ನು ಪ್ರತೀ ತಿಂಗಳು ಪಡೆಯಲು ತೆರಳಿದಾಗ ಬಯೋಮೆಟ್ರಿಕ್ ನೀಡಲು ಇದು ಸಹಾಯವಾಗುತ್ತದೆ ಎಂದು ಹೇಳಬಹುದು.
ಒಟ್ಟಾರೆ ಪಡಿತರ ಚೀಟಿಗೆ ಸಂಬಂಧಿಸಿದಂತೆ ಹೊಸ ಪಡಿತರ ಚೀಟಿ ಏಪ್ರಿಲ್ ಒಂದರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಹಲವರು ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಬಿಪಿಎಲ್ ಪಡಿತರ ಚೀಟಿಯು ಕಡ್ಡಾಯವಾಗಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಏಪ್ರಿಲ್ ಒಂದರಿಂದ ರಾಜ್ಯ ಸರ್ಕಾರ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುತ್ತಿದೆ ಎಂದು ತಿಳಿಸಿ ಧನ್ಯವಾದಗಳು.