ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಜಾರಿಯಾಗಿರುವ ಇದು ಗ್ಯಾರಂಟಿ ಯೋಜನೆಗಳಲ್ಲಿ ಜನರು ಹೆಚ್ಚು ಬಳಸುತ್ತಿರುವ ಹಾಗೂ ಜನರನ್ನು ಹೆಚ್ಚು ತಲುಪುತ್ತಿರುವ ಯೋಜನೆಯೆಂದರೆ ಅದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವಂತಹ ಶಕ್ತಿ ಯೋಜನೆ ಎಂದು ಹೇಳಬಹುದು.
ಮಹಿಳೆಯರಿಂದ ಶಕ್ತಿ ಯೋಜನೆಗೆ ಉತ್ತಮ ಪ್ರತಿಭೆಯು ಕೂಡ ವ್ಯಕ್ತವಾಗಿದ್ದು ಶಕ್ತಿ ಯೋಜನೆ ರಾಜ್ಯದಲ್ಲಿ ಆರಂಭವಾದ ನಂತರ ಪ್ರಯಾಣಿಕರ ಸಂಖ್ಯೆ ಸರ್ಕಾರಿ ಬಸ್ಗಳಲ್ಲಿ ದುಪ್ಪಟ್ಟಾಗಿದೆ. ಅದರಲ್ಲಿಯೂ ಮುಖ್ಯವಾಗಿ ಪುರುಷರಿಗೆ ಬಸ್ಸಿನಲ್ಲಿ ಮಹಿಳೆಯರ ಪ್ರಯಾಣದಿಂದಾಗಿ ಸೀಟು ಸಿಗದೆ ನಿಮಗೆ ಪ್ರಯಾಣ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ ಹೀಗಾಗಿ ರಾಜ್ಯ ಸರ್ಕಾರ ಬಸ್ಗಳ ಸಂಖ್ಯೆಯು ಕಡಿಮೆ ಇರುವ ಕಾರಣದಿಂದಾಗಿ ಹೊಸ ಬಸ್ಗಳ ಖರೀದಿಯ ವಿಚಾರವಾಗಿ ಸಂಚಾರವನ್ನು ಸುಲಭವಾಗಿ ಮಾಡುವುದು. ಇದರ ಉದ್ದೇಶವಾಗಿದೆ.
ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳ :
ಪ್ರತಿನಿತ್ಯ ಕೆಲಸ ಮಾಡುವಂತಹ ಮಹಿಳಾ ಪ್ರಯಾಣಿಕರು ಹೆಚ್ಚಿರುವ ಕಾರಣದಿಂದಾಗಿ ಕೆಲವೊಂದು ಗ್ರಾಮಾಂತರ ಪ್ರದೇಶದಲ್ಲಿ ಸರಿಯಾದ ಸರ್ಕಾರಿ ಬಸ್ಗಳ ವ್ಯವಸ್ಥೆ ಇರದ ಕಾರಣದಿಂದ ಅಂತ ಪ್ರದೇಶಗಳಿಗೆ ಅಲ್ಲಿಯೂ ಕೂಡ ಸರ್ಕಾರಿ ಬಸ್ ಗಳು ಕಾರ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಇನ್ನು ಸರ್ಕಾರಿ ಬಸ್ಗಳಲ್ಲಿ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಶೇಕಡ 50ರಷ್ಟು ಹೆಚ್ಚಳವಾಗಿದ್ದು ಹೊಸದಾಗಿ 250 ಹೊಸ ಬಸ್ ಗಳನ್ನು ಖರೀದಿ ಮಾಡಲು ಕೂಡ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಇದನ್ನು ಓದಿ : ಏಪ್ರಿಲ್ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ.!! ಯಾವಾಗ ಯಾಕೆ ಗೊತ್ತಾ?
ಹೊಸ ಬಸ್ಗಳ ಖರೀದಿ :
ಶೀಘ್ರದಲ್ಲಿ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ನೀಡಲಿದ್ದು ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಿತ ಸ್ಲೀಪರ್ ಹಾಗೂ ಮಲ್ಟಿ ಆಕ್ಸೆಲ್ ಸೆಮಿ ಇಂಟೆಗ್ರಲ್ ಸೀಟರ್ ಬಸ್ ಗಳನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ.
ಪ್ರಯಾಣಿಕರ ಸುರಕ್ಷತೆಗೂ ಕೂಡ ಹೆಚ್ಚಿನ ಒತ್ತನ್ನು ಈ ಬಸ್ಗಳಲ್ಲಿ ನೀಡಲಾಗಿದೆ. ಪ್ರಯಾಣಿಕರು ಈ ಬಸ್ಗಳ ಮೂಲಕ ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಅನುಕೂಲವಾಗಲಿದ್ದು ಶೀಘ್ರದಲ್ಲಿಯೇ ಈ ಮೂಲಕ 20 ಸ್ಲೀಪರ್ ಮತ್ತು 20 ಲೀಟರ್ ಬಸ್ ಗಳನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ ಹಾಗಾಗಿ ದೂರದ ಊರುಗಳಿಗೆ ಪ್ರಯಾಣಿಸುವಂತಹ ಪ್ರಯಾಣಿಕರಿಗೆ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ.
ಬಸ್ಗಳ ವಿಶೇಷತೆ :
ಈ ಬಸ್ಗಳಲ್ಲಿ 3 ಕ್ಯಾಮರಗಳು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಫೈಯರ್ ಡಿಟೆಕ್ಷನ್ ಸಿಸ್ಟಮ್ ಅನ್ನು ಕೂಡ ಈ ಬಸ್ ಗಳು ಹೊಂದಿರಲಿದೆ.
- ಬ್ಯಾಕ್ ರೆಸ್ಟ್ ಅನ್ನು ಪ್ರತಿಯೊಂದು ಬರ್ತ್ಗಳಿಗೂ ಕೂಡ ನೀಡಲಾಗಿದೆ.
- ಸುಖಕರವಾಗಿ ಬಸ್ನಲ್ಲಿ ನಿದ್ರಿಸಲು ಉತ್ತಮ ಗುಣಮಟ್ಟದ ಕುಶನ್ ಬರ್ತ್ ಹಾಗೂ ದಿಂಬುಗಳು ಕೂಡ ಇರಲಿವೆ.
- ಬೆಂಗಳೂರು ನಗರ ಕೋಲಾರ ಬೆಂಗಳೂರು ಗ್ರಾಮಾಂತರ ರಾಮನಗರ ಚಿತ್ರದುರ್ಗ ಚಿಕ್ಕಬಳ್ಳಾಪುರ ಶಿವಮೊಗ್ಗ ದಾವಣಗೆರೆ ಉಡುಪಿ, ಮಂಗಳೂರು ಹಾಸನ ಮೈಸೂರು ಚಿಕ್ಕಮಗಳೂರು, ಮಂಡ್ಯ ಹಾಗೂ ಚಾಮರಾಜನಗರ ಇತ್ಯಾದಿ ಪ್ರದೇಶಗಳಲ್ಲಿ ಈ ಬಸ್ಗಳು ಮೊದಲಿಗೆ ಎಂಟು ನೀಡಲಿವೆ.
ಒಟ್ಟಾರೆ ರಾಜ್ಯದಲ್ಲಿ ಹೊಸ ಬಸ್ಗಳ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಿದ್ದು ಈ ಬಗ್ಗೆ ಎಲ್ಲಾ ಪ್ರಯಾಣಿಕರಿಗೆ ಶೇರ್ ಮಾಡುವ ಮೂಲಕ ಶೀಘ್ರದಲ್ಲಿಯೇ ರಾಜ್ಯ ಸರ್ಕಾರದಿಂದ ಹೊಸ ಬಸ್ಗಳು ಖರೀದಿ ಮಾಡಲಾಗುತ್ತದೆ ಎಂಬುದರ ಮಾಹಿತಿಯನ್ನು ತಿಳಿಸುವ ಮೂಲಕ ಆರಾಮದಾಯಕ ಪ್ರಯಾಣವನ್ನು ಪ್ರಯಾಣಿಕರು ಮಾಡಬಹುದೆಂದು ತಿಳಿಸಿ ಧನ್ಯವಾದಗಳು.