ಹಲೋ ಸ್ನೇಹಿತರೇ, ಒಬ್ಬ ಕೃಷಿಕ ಸುಲಭವಾಗಿ, ಸರಿಯಾದ ರೀತಿಯಲ್ಲಿ ಬೆಳೆ ಬೆಳೆಯಬೇಕು, ತನ್ನ ಕೃಷಿ ಚಟುವಟಿಕೆಗಳನ್ನು ಮಾಡಬೇಕು ಎಂದಾದರೆ ಅದಕ್ಕೆ ಸರಿಯಾಗಿ ಮಳೆ ಬೇಕು. ಆದರೆ ಈ ಬಾರಿ ಹಿಂಗಾರು ಮತ್ತು ಮುಂಗಾರು ಎರಡು ಸಮಯದಲ್ಲೂ ಮಳೆಯ ಅಭಾವ ಎದುರಾಗಿದ್ದು ಕೃಷಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ವಸ್ತುಗಳ ಬೆಲೆಯು ಕೂಡ ಗಗನಕ್ಕೆ ಏರುತ್ತಿದೆ. ಹೀಗಾಗಿಯೇ ಸರ್ಕಾರವು ರೈತರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ವಲ್ಪಮಟ್ಟಿನ ಪರಿಹಾರ ನೀಡುತ್ತದೆ ಎನ್ನಬಹುದು.
Contents
ಸಿರಿಧಾನ್ಯ ಬೆಳೆಗೆ ಅನ್ನದಾತರಿಗೆ ಪ್ರೋತ್ಸಾಹ ನೀಡಿದ ಸರ್ಕಾರ
ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಬಜೆಟ್ ನಲ್ಲಿ ಸಿರಿಧಾನ್ಯ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ ಯೋಜನೆಯ ಬಗ್ಗೆ ಪ್ರಸ್ತಾವನೆ ಮಾಡಲಾಗಿತ್ತು. ಈಗ ಈ ಯೋಜನೆಯನ್ನು ಪ್ರಚುರಪಡಿಸಲಾಗಿದ್ದು, ರೈತರಿಗೆ ಈ ಯೋಜನೆಯ ಮೂಲಕ 10,000 ಸಹಾಯಧನ ನೀಡಲಾಗುವುದು.
ಸಿರಿಧಾನ್ಯಗಳ ಬೆಳೆ ಅದರಲ್ಲೂ ಮುಖ್ಯವಾಗಿ ರಾಗಿ ಬೆಳೆಗೆ ಸರ್ಕಾರವು ಪ್ರೋತ್ಸಾಹಧನವನ್ನು ನೀಡುತ್ತಿದ್ದು, ಇದನ್ನು ಬೆಳೆಯುವ ರೈತರು ಸರ್ಕಾರದಿಂದಲೇ ಸಹಾಯಧನವನ್ನು ಪಡೆಯಬಹುದು. ಸರ್ಕಾರ 2024ರ ಬಜೆಟ್ ನಲ್ಲಿ ರೈತ ಸಿರಿ ಯೋಜನೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಮೀಸಲಿಟ್ಟಿದೆ ಈ ಹಿನ್ನೆಲೆಯಲ್ಲಿ ರಾಗಿ ಬೆಳೆಯುವ ರೈತರು ಹತ್ತು ಸಾವಿರ ರೂಪಾಯಿಗಳ ಸಹಾಯಧನ ಪಡೆದುಕೊಳ್ಳುವಂತೆ ಆಗಿದೆ.
ಸಹಾಯಧನ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು:
- ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು
- ರೈತರೇ ಆಗಿರಬೇಕು ಹಾಗೂ ಉಳುಮೆ ಮಾಡುವವರು ಸ್ವಂತ ಜಮೀನು ಹೊಂದಿರಬೇಕು
- ಕನಿಷ್ಠ ಒಂದು ಹೆಕ್ಟರ್ ಜಮೀನು ಹೊಂದಿರುವ ರೈತರು ಸಿರಿ ಧಾನ್ಯ ಬೆಳೆಯಲು ಸಹಾಯಧನ ಪಡೆದುಕೊಳ್ಳಲು ಅರ್ಹರು.
ಮಹಿಳೆಯರಿಗೆ ಬಂಪರ್ ಅವಕಾಶ! ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ದಾಖಲೆ ಕಡ್ಡಾಯ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ರೈತರ ಭೂಮಿಯ ಪತ್ರ ಅಥವಾ ಪಹಣಿ ಪತ್ರ
- ಆಧಾರ್ ಕಾರ್ಡ್
- ಖಾಯಂ ನಿವಾಸದ ಪ್ರಮಾಣ ಪತ್ರ
- ವೋಟರ್ ಐಡಿ
- ಇತ್ತೀಚಿನ ಭಾವಚಿತ್ರ
- ಬ್ಯಾಂಕ್ ಖಾತೆ ವಿವರ
ರೈತ ಸಿರಿ ಯೋಜನೆಯ ಅಡಿಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯಲು ಇಂದಿನ ಯುವ ರೈತರಿಗೂ ಕೂಡ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಸಹಾಯಧನ ನೀಡುತ್ತಿದೆ.
ಸರ್ಕಾರದಿಂದಲೇ ಸಿಗುವ 10,000ಗಳ ಸಹಾಯಧನವನ್ನು ಪಡೆದುಕೊಳ್ಳಲು ಹತ್ತಿರದ ರೈತ ಕೇಂದ್ರ ಹಾಗೂ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇತರೆ ವಿಷಯಗಳು:
ಹೊಸ ಬಿಪಿಎಲ್ ಕಾರ್ಡ್ ಪಡೆಯುವ ಸುಲಭ ಮಾರ್ಗ.! ಇಲ್ಲಿಂದಲೇ ಫಾರ್ಮ್ ಭರ್ತಿ ಮಾಡಲು ಲಿಂಕ್
PM ಕಿಸಾನ್ 17 ನೇ ಕಂತಿಗೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್! ಇಲ್ಲಿದೆ ಸಂಪೂರ್ಣ ಮಾಹಿತಿ