ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರ ಪಡಿತರ ಚೀಟಿಯನ್ನು ಬಡತನದ ರೇಖೆಯಿಂದ ಕೆಳಗಿರುವ ಜನರಿಗೆ ನೀಡಿದ್ದು ಕರ್ನಾಟಕ ರಾಜ್ಯ ಸರ್ಕಾರವು ಈ ಕಾರ್ಡಿನೊಂದಿಗೆ ನೀಡುವ ಸಬ್ಸಿಡಿಗಳ ಮೂಲಕ ವಸ್ತುಗಳನ್ನು ರಾಜ್ಯದ ಜನತೆ ಪಡೆಯಬಹುದಾಗಿದೆ ಇದೀಗ ಅನ್ನ ಭಾಗ್ಯ ಯೋಜನೆಯು ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಆ ಜಾರಿಗೆ ತಂದಿದ್ದಾರೆ.
![Issuance of new ration cards](https://i0.wp.com/kannadadigital.com/wp-content/uploads/2024/03/Issuance-of-new-ration-cards.jpg?resize=300%2C169&ssl=1)
Contents
ಅನ್ನಭಾಗ್ಯ ಯೋಜನೆ :
ಕರ್ನಾಟಕ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಇತ್ತೀಚಿಗೆ ಶಾಸಕಿಯಾದ ನಯನ ಮೊಟ್ಟಮೊರವರು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳ ಅರ್ಜಿಗಳ ತಾಂತ್ರಿಕ ಸಮಸ್ಯೆಯ ಬಗ್ಗೆ ತಮ್ಮ ಗಮನವನ್ನು ಸಚಿವರಿಗೆ ಹೇಳುವುದರ ಮೂಲಕ ಅನ್ನಭಾಗ್ಯ ಯೋಜನೆ ಜಾರಿಯಾಗಿ ಇಷ್ಟು ತಿಂಗಳಾದರೂ ಕೂಡ 5 ಕೆಜಿ ಅಕ್ಕಿ ಹಣ ಅರ್ಹರಿಗೆ ಜಮಾ ಆಗಿಲ್ಲ ಎಂದು ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪ ರವರು ಈ ವರ್ಷ 2.5 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ ಅದರಂತೆ ಮಾರ್ಚ್ 31 ದಿನದ ಒಳಗಾಗಿ ನುಡಿದ ಅರ್ಜಿಗಳನ್ನು ಪರಿಶೀಲಿಸಿ.
ಡಿಪಿಯಲ್ಲಿ ಮತ್ತು ಎಪಿಎಲ್ ರೇಷನ್ ಕಾರ್ಡ್ ಗಳನ್ನು ಏಪ್ರಿಲ್ ಒಂದರಿಂದಲೇ ವಿತರಿಸಲಾಗುವುದು ಎಂದು ಸೂಚನೆ ನೀಡಿದರು.
ಇದನ್ನು ಓದಿ : ಮಹಿಳೆಯರಿಗೆ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆಯ ಹಣ : ನಿಮ್ಮ ಹೆಸರು ಈ ಪಟ್ಟಿಯಲ್ಲಿದೆ ತಿಳಿದುಕೊಳ್ಳಿ !
ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ :
ಹೊಸ ಪಡಿತರ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ರೇಷನ್ ಕಾರ್ಡ್ ವಿತರಣೆ ಮಾಡುವುದರ ಜೊತೆಗೆ ಈ ಅರ್ಜಿಗಳ ಹಂಚಿಕೆ ಪ್ರಕ್ರಿಯೆ ಮುಗಿದ ನಂತರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಲು ಏಪ್ರಿಲ್ ಒಂದು 2024 ರ ನಂತರ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸುವವರು https://ahara.kar.nic.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಪಾಸ್ಪೋರ್ಟ್ ಸೈಜ್ ಫೋಟೋ ಗುರುತಿನ ಚೀಟಿ ವಿಳಾಸಪುರವೇ ಆದಾಯ ಪುರಾವೆ,
ವಾರ್ಡ್ ಕೌನ್ಸಿಲರ್ ಮತ್ತು ಪ್ರಧಾನ ಮಂತ್ರಿ ಅವರಿಂದ ಪ್ರಮಾಣ ಪತ್ರ ಹೀಗೆ ಕೆಲವು ದಾಖಲೆಗಳನ್ನು ಹೊಂದಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
ಒಟ್ಟಾರೆ ಏಪ್ರಿಲ್ ಒಂದರಿಂದ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂಬ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಇದು ಸುವರ್ಣ ಅವಕಾಶ ಎಂದು ತಿಳಿಸಿ ಧನ್ಯವಾದಗಳು.
ಸರ್ಕಾರದ ಜಾಲತಾಣ : ಇಲ್ಲಿದೆ ಕ್ಲಿಕ್ ಮಾಡಿ