ನಮಸ್ಕಾರ ಸ್ನೇಹಿತರೇ, ಸಿರುಗುಪ್ಪ ತೋಟಗಾರಿಕೆಯ ಇಲಾಖೆ ವತಿಯಿಂದ 2024-25 ನೇ ಸಾಲಿಗಾಗಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಅಡಿ ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಸಿರುಗುಪ್ಪದ (ಜಿಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಮಹಾಂತೇಶ ಅವರು ಮಾಹಿತಿಯನ್ನು ತಿಳಿಸಿದ್ದಾರೆ.
![New Schem](https://i0.wp.com/kannadadigital.com/wp-content/uploads/2024/04/New-Schem-1.jpg?resize=640%2C360&ssl=1)
ಸೌಲಭ್ಯಗಳು:
ಫಲಾನುಭವಿಯ ಆಧಾರಿತವಾದ ನರೇಗಾ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಸಣ್ಣ, ಅತಿ ಸಣ್ಣ ರೈತರಿಗೆ ಅಂಜೂರ, ಸಪೋಟ, ತಾಳೆಬೆಳೆ, ಮಾವು, ಬಾಳೆ, ತೆಂಗು, ದಾಳಿಂಬೆ, ನುಗ್ಗೆ, ಪಪ್ಪಾಯ ಮತ್ತು ಪೇರಲ ಬೆಳೆಗಳನ್ನು ಬೆಳೆಯಲು ಹಾಗೂ ಕೊಳವೆ ಬಾಯಿಯ ಮರುಪೂರ್ಣ ಘಟಕವನ್ನು ಮಾಡಲು ಸಹಾಯಧನವನ್ನು ನೀಡಲಾಗುವುದು.
ನೀರಾವರಿಯ ಸೌಕರ್ಯವುಳ್ಳ ರೈತರು ತಮ್ಮ ಜಮೀನುಗಳಲ್ಲಿ ಕಾಮಗಾರಿಯನ್ನು ಕೈಗೊಂಡಲ್ಲಿ ನರೇಗಾ ಯೋಜನೆಯ ಅನುದಾನವನ್ನು ಬಳಸಿಕೊಂಡು ಕೂಲಿಯ ಮೊತ್ತವನ್ನು ಮತ್ತು ಸಾಮಗ್ರಿಯನ್ನು ವೆಚ್ಚವನ್ನು ಆನ್ಲೈನ್ ಮೂಲಕ ಪಾವತಿ ಮಾಡಲಾಗುತ್ತದೆ.
ಐಫೋನ್ ಅರ್ಧ ಬೆಲೆಗೆ ಖರೀದಿ ಮಾಡಿ : ಇಲ್ಲಿದೆ ಆಫರ್ ಲಿಂಕ್ ಹಾಗು ಪಟ್ಟಿ ನೋಡಿ !
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಮುದಾಯದಲ್ಲಿ ಕೃಷಿಹೊಂಡ, ಈರುಳ್ಳಿ ಶೇಖರಣಾ ಘಟಕ, ಹೊಸ ಪ್ರದೇಶ ವಿಸ್ತರಣೆ, ಅಂಜೂರ, ದಾಳಿಂಬೆ, ಪಾಲಿಹೌಸ್ ನಿರ್ಮಾಣವನ್ನು ಮಾಡಿಕೊಳ್ಳಲು ಸಹಾಯಧನವನ್ನು ನೀಡಲಾಗುವುದು. ಪ್ರಧಾನಮಂತ್ರಿ ಕೃಷಿ ಸಿಂಚಾಯನ ಯೋಜನೆಯಡಿ ತೋಟಗಾರಿಕೆಯ ಬೆಳೆ ಬೆಳೆಯುವಂತಹ ರೈತರಿಗೆ ಹನಿ ನೀರಾವರಿಯ ಸೌಲಭ್ಯವನ್ನು ನೀಡಲಾಗುವುದು. ಅರ್ಹ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಇತರೆ ವಿಷಯಗಳು:
ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿಮನ್ನಾ : ತಡಮಾಡದೆ ಈ ಕೆಲಸ ತಕ್ಷಣ ಮಾಡಿ !
ಇನ್ನುಮುಂದೆ ಯಾವ ಟೋಲ್ ಗೇಟ್ ಕೂಡ ದೇಶದಲ್ಲಿ ಇರುವುದಿಲ್ಲ ; ಹೊಸ ಟ್ವಿಸ್ಟ್ ನಲ್ಲಿದೆ ಗುಡ್ ನ್ಯೂಸ್