ನಮಸ್ಕಾರ ಸ್ನೇಹಿತರೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಷಕ್ಕೆ 36,000 ಗಳು ಜಮಾ ಆಗಲಿದೆ. ಹಾಗಾದರೆ ರೈತರು ಕೇಂದ್ರ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಹೇಗೆ ಪಡೆಯಬೇಕು ಎಂಬುದನ್ನು ನೋಡಬಹುದಾಗಿದೆ.
![The money will be deposited in the farmer's bank account](https://i0.wp.com/kannadadigital.com/wp-content/uploads/2024/04/The-money-will-be-deposited-in-the-farmers-bank-account-1.jpg?resize=300%2C169&ssl=1)
ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೆ ದೇಶದಲ್ಲಿ ಆ ದೇಶ ಆರ್ಥಿಕ ಅಭಿವೃದ್ಧಿಯಾಗುತ್ತದೆ ಎಂದು ಹೇಳುವುದರಲ್ಲಿ ಯಾವುದೇ ಎರಡು ಮಾತಿಲ್ಲ ಏಕೆಂದರೆ ರೈತರು ದೇಶದ ಬೆನ್ನೆಲುಬಾಗಿದ್ದಾರೆ. ರಾಜ್ಯದ ಜನತೆಗೆ ಬೇಕಾದ ಆಹಾರ ಪದಾರ್ಥ ಧಾನ್ಯಗಳನ್ನು ಬೆಳೆಯುವ ರೈತರ ಜೀವನ ಸುಗಮವಾಗಿದ್ದಾಗ ಮಾತ್ರ ಅವರು ಸರಿಯಾದ ರೀತಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ರೈತರು ಕೃಷಿ ಭೂಮಿಯಲ್ಲಿ ಅವರಿಗೆ ಪಿಂಚಣಿ ಯೋಜನೆ ಎಂದು ಸಿಗೋದಿಲ್ಲ.
ಇದನ್ನು ಗಮನಿಸಿದಂತಹ ಕೇಂದ್ರ ಸರ್ಕಾರ ಇದೀಗ ಕೃಷಿ ಭೂಮಿಯಲ್ಲಿ ದುಡಿದು ಜೀವನ ಸಾಧಿಸುವಂತಹ ರೈತರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ ಆ ಮೂಲಕವಾಗಿ ರೈತರು ವಾರ್ಷಿಕ 36,000ಗಳ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಕೇಂದ್ರ ಸರ್ಕಾರದ ಆಯೋಜನೆ ಯಾವುದು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
Contents
ಪ್ರಧಾನ ಮಂತ್ರಿ ಮನ್ ಧನ್ ಯೋಜನೆ :
ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡು ಅಂತಹ ರೈತರು ಪ್ರಧಾನಮಂತ್ರಿ ಮನ್ ಧನ್ ಯೋಜನೆ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ವಿಶೇಷತೆ ಏನೆಂದರೆ ಅತಿ ಕಡಿಮೆ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು 3000 ರೂಪಾಯಿಗಳ ಪಿಂಚಣಿಯನ್ನು ಅರವತ್ತು ವರ್ಷದ ನಂತರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನು ಓದಿ : ರೇಷನ್ ಕಾರ್ಡ್ ಡೌನ್ಲೋಡ್ ಮಾಡುವ ಸುಲಭ ವಿಧಾನ!
ಎಷ್ಟು ಮೊತ್ತ ಹೂಡಿಕೆ ಮಾಡಬೇಕು :
ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 18 ರಿಂದ 40 ವರ್ಷ ವಯಸ್ಸಿನವರು ಹೂಡಿಕೆ ಮಾಡಬಹುದಾಗಿದೆ.
- ಪ್ರತಿ ತಿಂಗಳು ಕೇವಲ 56 ರೂಪಾಯಿಗಳ ಠೇವಣಿಯನ್ನು 18 ವರ್ಷಕ್ಕೆ ನೀವು ಹೂಡಿಕೆ ಮಾಡಿದರೆ ಸಾಕು.
- ಅದೇ ರೀತಿ ಪ್ರತಿ ತಿಂಗಳು 110 ರೂಪಾಯಿಗಳನ್ನು 30 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಬೇಕು.
- 220ಗಳನ್ನು 40 ವರ್ಷಕ್ಕೆ ಹೂಡಿಕೆ ಮಾಡಬೇಕಾಗುತ್ತದೆ.
ಹೀಗೆ ಊರಿಗೆ ಮಾಡುವುದರ ಮೂಲಕ ಕನಿಷ್ಠ 660ಗಳಿಂದ ಗರಿಷ್ಟ 200400 ಗಳ ವರೆಗೆ ವಾರ್ಷಿಕವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ವರ್ಷ 36,000 ಅಥವಾ ಪ್ರತಿ ತಿಂಗಳು 3,000ಗಳ ಹಣವನ್ನು 60 ವರ್ಷದ ನಂತರ ಪಿಂಚಣಿಯಾಗಿ ಪಡೆಯಬಹುದಾಗಿದೆ.
40 ವರ್ಷಗಳ ನಂತರ ಹೂಡಿಕೆ ಮಾಡುವಂತಹ ಅಗತ್ಯವಿರುವುದಿಲ್ಲ ಠೇವಣಿ ಹಣದಿಂದಲೇ ಪಿಂಚಣಿಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಒಂದು ವೇಳೆ ಹೂಡಿಕೆದಾರರು ಮರಣ ಹೊಂದಿದರೆ ಪಿಂಚಣಿ ಯೋಜನೆಯ ಆ ಹಣವನ್ನು ಆತನ ಪತ್ನಿಗೆ ನೀಡಲಾಗುತ್ತದೆ ಕೇವಲ ಪತ್ನಿ ಮಾತ್ರ ನಾಮಿನೇ ಆಗಿರಬೇಕು ಮನೆಯ ಇತರ ಸದಸ್ಯರಿಗೆ ಇದರ ಪ್ರಯೋಜನ ಸಿಗುವುದಿಲ್ಲ ಎಂದು ಈ ಯೋಜನೆಯನ್ನು ತಿಳಿಸಲಾಗಿದೆ.
ಯೋಜನೆಗೆ ಬೇಕಾಗುವ ದಾಖಲೆಗಳು :
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮನ್ ಧನ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ರೈತರು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವಂತಹ ಪ್ರಮಾಣ ಪತ್ರ.
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ ಕಾರ್ಡ್
ಹೀಗೆ ಈ ದಾಖಲೆಗಳನ್ನು ಹೊಂದುವುದರ ಮೂಲಕ ರೈತರು ಅಂಚೆ ಕಛೇರಿಯಲ್ಲಿ ಅಥವಾ ಬ್ಯಾಂಕಿಗೆ ಭೇಟಿ ನೀಡಿ ಪ್ರಧಾನಮಂತ್ರಿ ಮನ್ ಧನ್ ಯೋಜನೆಗೆ ಖಾತೆಯನ್ನು ಪ್ರಾರಂಭಿಸಬಹುದಾಗಿದೆ.
ಈ ಖಾತೆಯನ್ನು ಒಂದು ಬಾರಿ ಪ್ರಾರಂಭಿಸಿದರೆ, ನಿಮ್ಮ ಬ್ಯಾಂಕ್ ಅಕೌಂಟ್ನಿಂದ ನೇರವಾಗಿ ಯೋಜನೆಗೆ ಹಣ ವರ್ಗಾವಣೆಯಾಗುವಂತೆ ಮಾಡಲಾಗುತ್ತದೆ ಹಾಗಾದರೆ 60 ವರ್ಷದ ನಂತರ ಯಾರ ಬಳಿಯೂ ಒಂದು ರೂಪಾಯಿ ಹಣಕ್ಕೆ ಕೈಚಾಚುವ ಅಗತ್ಯವಿಲ್ಲ ಹಾಗಾಗಿ ಈ ಮಾಹಿತಿಯನ್ನು ತಿಳಿಸಿ.
ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರೈತರಿಗಾಗಿಯೇ ಈ ಯೋಜನೆ ಸಾಕಷ್ಟು ಉಪಯೋಗವಾಗಲಿದ್ದು ಆರ್ಥಿಕವಾಗಿ ಸುಧಾರಿತ ಜೀವನವನ್ನು 60 ವರ್ಷದ ನಂತರ ಕಂಡುಕೊಳ್ಳಲು ಈ ಯೋಜನೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ಹೇಳಬಹುದು .
ಹಾಗಾಗಿ ಈ ಮಾಹಿತಿಯ ಬಗ್ಗೆ ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಹಾರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ವೃದ್ಯಾಪ್ಯದ ನಂತರ ಆರ್ಥಿಕ ಜೀವನವನ್ನು ಸುಗಮವಾಗಿ ಸಾಗಿಸಬಹುದೆಂದು ತಿಳಿಸಿ ಧನ್ಯವಾದಗಳು.