ನಮಸ್ಕಾರ ಸ್ನೇಹಿತರೆ ಯಾವುದೇ ರೀತಿಯಲ್ಲಿ ರೈತರಿಗೆ ರಾಜ್ಯದಲ್ಲಿ ತೊಂದರೆ ಆಗಬಾರದು ಮತ್ತು ಕೃಷಿಯಲ್ಲಿ ರೈತರು ಮತ್ತಷ್ಟು ಅಭಿವೃದ್ಧಿಯನ್ನು ಸಾಧಿಸಬೇಕೆಂಬ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹ ನೀಡುತ್ತದೆ.
![a-new-fate-for-farmers-central-govt](https://i0.wp.com/kannadadigital.com/wp-content/uploads/2024/04/a-new-fate-for-farmers-central-govt.jpg?resize=300%2C169&ssl=1)
ಸರ್ಕಾರ ಬಂದಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಈಗಾಗಲೇ ಸಾಲ ಸೌಲಭ್ಯವನ್ನು ಕೂಡ ಬ್ಯಾಂಕುಗಳು ನೀಡುತ್ತಿದ್ದು ಈ ಪ್ರಯೋಜನವನ್ನು ರೈತರು ಪಡೆಯಬಹುದಾಗಿದೆ. ಪ್ರಧಾನಮಂತ್ರಿ ಫಸಲ್ ಬೆಳೆ ವಿಮೆ ಯೋಜನೆ ಮೂಲಕ ಸರ್ಕಾರವು ರೈತರು ಬೆಳೆದಂತಹ ಬೆಳೆಗಳಿಗೆ ಬೆಳೆ ವಿಮೆ ನೀಡುತ್ತಿದೆ. ಹಾಗಾದರೆ ಈ ಯೋಜನೆಗೆ ಸಂಬಂಧಿಸಿ ದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
Contents
ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮೆ ಯೋಜನೆ :
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮೆ ಯೋಜನೆಯನ್ನು 2016 ರಂದು ಘೋಷಣೆ ಮಾಡಿತು. ರೈತರ ಬೆಳೆ ಹವಮಾನ ವೈಪರಿತ್ಯದ ಕಾರಣದಿಂದ ಹಾನಿಯಾದರೆ ಅಥವಾ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತರಿಗೆ ತೊಂದರೆ ಆದರೆ ಆ ಮೂಲಕ ಪರಿಹಾರವನ್ನು ನೀಡಲು ಮುಂದಾಗಿದೆ.
ಇದನ್ನು ಓದಿ : 3 ಗ್ಯಾಸ್ ಸಿಲಿಂಡರ್ ಉಚಿತ : ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರಬೇಕು
ಸಬ್ಸಿಡಿ ಹಣ ಸಿಗಲಿದೆ :
ರೈತರ ತಮ್ಮ ಬೆಳೆಗಳಿಗೆ ವಿಮೆಯನ್ನು ಈ ಯೋಜನೆಯಡಿಯಲ್ಲಿ ಮಾಡಿಸಲು ಕೇವಲ 2000ಗಳನ್ನು ಪ್ರತಿ ಹೆಕ್ಟರಿಗೆ ಪಾವತಿಸಬೇಕಾಗುತ್ತದೆ ಉಳಿದಂತಹ ಮೊತ್ತವನ್ನು ಸಬ್ಸಿಡಿಯ ರೂಪದಲ್ಲಿ ಸರ್ಕಾರವು ನೀಡುತ್ತದೆ.
ಕೇಂದ್ರ ಸರ್ಕಾರ ವಿಮೆ ವೆಚ್ಚದಲ್ಲಿ ಶೇಕಡ 50ರಷ್ಟು ಮತ್ತು ರಾಜ್ಯ ಸರ್ಕಾರ ಶೇಕಡ 50ರಷ್ಟು ನೀಡುತ್ತದೆ. ಕೇಂದ್ರದ ಈ ಬೆಳೆ ವಿಮೆ ಮಾಡಿಸುವುದರಿಂದ ರೈತರು ತಾವು ಬೆಳೆದಂತಹ ಬೆಳೆಗಳಾದ ಖಾರಿಫ್ ಮತ್ತು ರಬೀ ಮುಂತಾದ ಅಪಾಯಗಳಿಂದ ಸುಲಭವಾಗಿ ರಕ್ಷಣೆಯನ್ನು ಪಡೆಯಬಹುದಾಗಿದೆ.
ಯೋಜನೆಯ ಮೊತ್ತ :
ಪ್ರಧಾನ ಮಂತ್ರಿ ಫಸಲ್ ಬೆಳಗ್ಗೆನೇ ಯೋಜನೆಯ ಅಡಿಯಲ್ಲಿ ಪ್ರತಿ ಹೆಕ್ಟರ್ ಗೆ 25,600 ಗಳನ್ನು 2024ರಲ್ಲಿ ಬೆಳೆ ವಿಮೆ ನೀಡುತ್ತಿದೆ. ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಒಂದು ಅಧಿಸೂಚಿತ ಘಟಕದಲ್ಲಿ ಬೆಳೆವಿಮೆಗೆ ಒಳಪಟ್ಟಂತಹ ರೈತರಿಗೆ ಈ ಸೌಲಭ್ಯವನ್ನು ಸರ್ಕಾರ ನೀಡುತ್ತದೆ.
- ಸೂರ್ಯಕಾಂತಿ ಬೆಳೆಗೆ ಪ್ರತಿ ಗಂಟೆಗೆ 44,300.
- ಸಾಸಿವೆ ಬೆಳೆ ಪ್ರತಿ ಹೆಕ್ಟರ್ ಗೆ 45,500.
- ಬಾರ್ಲಿ 4410 ಪ್ರತಿ ಹೆಕ್ಟೇರ್.
- ಗೋಧಿ, 67500.
- ಹತ್ತಿ 34,650.
- ಭತ್ತ 17500.
ಹೀಗೆ ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿ ದಂತೆ ಸರ್ಕಾರವು ಬೆಳೆಗಳಿಗೆ ಅನುಗುಣವಾಗಿ ಸಬ್ಸಿಡಿ ಮೊತ್ತವನ್ನು ನಿಗದಿ ಪಡಿಸಿದೆ.
ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮೆ ಯೋಜನೆ ಉದ್ದೇಶ :
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿರುವ ಮುಖ್ಯ ಉದ್ದೇಶ ಏನಂದರೆ ಬೆಳೆ ಹಾಲಿ ಸಂಭವಿಸಿದರೆ ವಿವೆ ಮತ್ತು ಅಪಾಯದ ರಕ್ಷಣೆ ನೀಡುವ ಗುರಿಯನ್ನು ರೈತರಿಗೆ ಈ ಯೋಜನೆ ಹೊಂದಿದ್ದು ವಿಮರಕ್ಷಣೆಯ ಅಡಿಯಲ್ಲಿ ವಿಮೆ ಮಾಡಿದಂತಹ ಬೆಳೆ ನಾಶವಾದರೆ ಅದರ ಸಂಪೂರ್ಣ ಜವಾಬ್ದಾರಿಯು ವಿಮಾ ಕಂಪನಿಯದ್ದಾಗಿರುತ್ತದೆ.
ಅಲ್ಲದೆ ಯೋಚನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೃಷಿ ಇಲಾಖೆಗೆ ಭೇಟಿ ನೀಡಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಸಾಂಪ್ರದಾಯಿಕ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಳೆ ವಿಮೆಯನ್ನು ನೀಡುತ್ತಿದೆ ಎಂದು ಹೇಳಬಹುದು. ಹಾಗಾಗಿ ಈ ಯೋಜನೆಯ ಬಗ್ಗೆ ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಅವರಿಗು ತಮ್ಮ ಬೆಳೆಗಳಿಗೆ ಸಂಬಂಧಿಸಿದಂತೆ ವಿಮೆ ಮಾಡಿಸಲು ತಿಳಿಸಿ ಧನ್ಯವಾದಗಳು.